Ticker

6/recent/ticker-posts

Header Ads Widget

ಹೆಚ್ಚುವರಿ ಬಡ್ಡಿ ಮನ್ನಾದ ಬಗ್ಗೆ ಶೀಘ್ರವಾಗಿ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದ ಸುಪ್ರೀಂಕೋರ್ಟ್


ಲಾಕ್ಡೌನ್ ಸಮಯದಲ್ಲಿ ವಿವಿಧ ಬ್ಯಾಂಕುಗಳ ಸಾಲಗಳಿಗೆ ಸುಮಾರು ಐದು ತಿಂಗಳ ತನಕ ವಿನಾಯ್ತಿಯನ್ನು ನೀಡಲಾಗಿತ್ತು. ಆದರೆ ಇದಕ್ಕೆ ಹೆಚ್ಚುವರಿ ಬಡ್ಡಿಯನ್ನು ವಿಧಿಸಲಾಗುತ್ತಿತ್ತು. ಇದೀಗ ಸುಪ್ರೀಂಕೋರ್ಟ್ ಈ ಹೆಚ್ಚುವರಿ ಬಡ್ಡಿಯನ್ನು ಕೇಂದ್ರ ಸರ್ಕಾರವೇ ಭರಿಸಬೇಕು ಎಂದು ಹೇಳಿದೆ.


ಇಡೀ ದೇಶಾದ್ಯಂತ ಲಾಕ್ಡೌನ್ ಹೇರಿರುವುದು ಕೇಂದ್ರಸರ್ಕಾರ. ಆದ್ದರಿಂದ ಈ ಹೆಚ್ಚುವರಿ ಬಡ್ಡಿಯ ಮನ್ನಾದ ಬಗ್ಗೆ ಕೇಂದ್ರ ಸರ್ಕಾರವೇ ಇದರ ನಿರ್ಣಯ ಏನು ಅಂತ ಸೆಪ್ತೆಂಬರ್ 1 ರ ಒಳಗೆ ತಿಳಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.


ಒಂದು ವೇಳೆ ಕೇಂದ್ರ ಸರ್ಕಾರ ತನ್ನ ಸ್ಪಷ್ಟ ನಿಲುವನ್ನು ತಿಳಿಯಪಡಿಸಲು ವಿಫಲವಾದಲ್ಲಿ ಸುಪ್ರೀಂಕೋರ್ಟ್ ತನ್ನ ವಿಶೇಷ ಅಧಿಕಾರವನ್ನು ಬಳಸಿಕೊಂಡು ಇದೊಂದು ಪ್ರಕೃತಿ ವಿಕೋಪದಡಿ ಯಲ್ಲಿ ಬರುವ ಹಾನಿ ಎಂದು ಪರಿಗಣಿಸಲಾಗುವುದು ಎಂದು ಸೂಚನೆಯನ್ನು ನೀಡಿದೆ.